Saturday, January 27, 2024

ಹೊಸ್ತಿಲಿಗೆ ರಂಗೋಲಿ ಹಾಕುವ ಕ್ರಮ


ಮನುಷ್ಯನ ದೇಹಕ್ಕೆ ತಲೆ ಹೇಗೆ ಶ್ರೇಷ್ಠ ನೋ ಹಾಗೆ ಮನೆಗೆ ಮುಂಬಾಗಿಲು ಶ್ರೇಷ್ಠ .ಅದನ್ನು ನಾವು ತಲೆಬಾಗಿಲು ಅಂತಾನೇ ಕರಿತೇವೆ. ಮನೆ ಕಟ್ಟುವಾಗ ನಾವು ಎರಡು ಸಲ ಮೂಹೂರ್ತ ನೋಡುತ್ತೇವೆ . ಒಂದು ಭೂಮಿ ಪೂಜೆ , ಇನ್ನೊಂದು ಚೌಕಟ್ಟು ಪೂಜೆಗೆ. ಅಷ್ಟು ಮಹತ್ವ ಇದೆ ಆ ತಲೆ ಬಾಗಿಲಿಗೆ ಯಾವಾಗಬೇಕೊ ಆವಾಗ ಕೂಡಿಸಬಾರದು ಚೌಕಟ್ಟು ಕೂಡಿಸುವಾಗ ಸ್ಥಿರ ಲಗ್ನ ವಿರಬೇಕು , ಶುಭ ತಿಥಿ ,ವಾರ ಮತ್ತು ನಕ್ಷತ್ರ ಗಳಿದ್ದಾಗ ಮಾತ್ರ ಮುತ್ತು.,ರತ್ನ ,ಹವಳ ಬಂಗಾರ ಮತ್ತು ಬೆಳ್ಳಿ , ಹಾಲು ತುಪ್ಪವನ್ನು ಹಾಕಿ ಬ್ರಾಹ್ಮಣರು ಮಂತ್ರಗಳೊಂದಿಗೆ ವಾಸ್ತು ಪುರುಷನ ಆಹ್ವಾನ ಮಾಡಿಕೊಳ್ತಾರೆ . ಅದಕ್ಕೆ ಅಷ್ಟು ಮಹತ್ವವಿದೆ ಆ ಮುಂಬಾಗಿಲು ಚೌಕಟ್ಟು ಹೊಸ್ತಿಲಕ್ಕೆ..ಅದಕ್ಕೆ ದಿನಾಲೂ ತೊಳೆದು ರಂಗವಲ್ಲಿ ಹಾಕಿದಾಗ ಲಕ್ಷೀ ಪ್ರಸನ್ನತೆ ದೊರೆಯುತ್ತದೆ. ಯಾವ ದುಷ್ಟ ಶಕ್ತಿ ಕೂಡಾ ರಂಗವಲ್ಲಿ ದಾಟಿ ಒಳಗಡೆ ಬರೊದಿಲ್ಲ. ನಿಮಗೆ ಗೊತ್ತಿರಬಹುದು ಮನೆಯಲ್ಲಿ ಶ್ರಾದ್ಧ ದಿನ ನಾವು ಬಾಗಿಲಿಗೆ ರಂಗೋಲಿಯನ್ನು ಹಾಕುವದಿಲ್ಲ ಕಾರಣ ಪಿತೃಗಳನ್ನು ಆಹ್ವಾನ ಮಾಡಿರುತ್ತೇವೆ. ಪಿತೃಗಳು ಬರುತ್ತಾರೆ ಅಂತ ಅದಕ್ಕೆ ಬಾಗಿಲಿಗೆ ರಂಗೋಲಿ ಹಾಕುವದರಿಂದ ಆಪತ್ತುಗಳು ದೂರವಾಗುತ್ತವೆ. ದಯವಿಟ್ಟು ಎಲ್ಲ ಹೆಣ್ಣು ಮಕ್ಕಳು ದಿನಾಲೂ ಹೊಸ್ತಿಲು ತೊಳೆದು ರಂಗೋಲಿ ಬಿಡಿಸಿ ...

ಹೊಸ್ತಿಲವನ್ನು ನಾವು ಎರಡು ಭಾಗವನ್ನಾಗಿ ಮಾಡಿದಾಗ , ಒಂದು ಎಡ ಮತ್ತು ಬಲ ಮದ್ಯೆ ಒಳ ಬರುತ್ತಿರುವ ಹಾಗೆ ಗೌರಿ ಪಾದ ಎಡಕ್ಕೆ ಹನ್ನೆರಡು ಎಳೆ ಮತ್ತು ಬಲಕ್ಕೆ ಹನ್ನೆರಡು ಎಳೆ ಒಟ್ಟು ಇಪ್ಪತ್ತುನಾಲ್ಕು ಎಳೆಗಳನ್ನು ಬಿಡಿಸಬೇಕು . ಯಾಕೆ ಇಪ್ಪತ್ತನಾಲ್ಕು ಅಂದರೆ ಅವು ಭಗವನ್ನಾಮಗಳು . ನಂತರ ಎರಡು ಶಂಖ ,ಎರಡು ಚಕ್ರ ಶಂಖ ಚಕ್ರ ವಿಷ್ಣವಿನ ಲಾಂಛನಗಳು ಎಲ್ಲಿ ಶಂಖ ಚಕ್ರ ವಿರುತ್ತೊ ಅಲ್ಲಿ ವಿಷ್ಣು ಇರತ್ತಾನೆ , ಎಲ್ಲಿ ವಿಷ್ಣು ಇರುತ್ತಾನೆಯೋ ಅಲ್ಲಿ ಸಾಕ್ಷಾತ್ ಲಕ್ಷೀ ವಾಸವಿರುತ್ತೆ. ನಂತರ , ನಾಲ್ಕು ಸ್ವಸ್ತಿಕ ಎಡಕ್ಕೆ ಎರಡು ಮತ್ತು ಬಲಕ್ಕೆ ಎರಡು ಹಾಕಬೇಕು. ಸ್ವಸ್ತಿಕ ಯಾಕೆ ಅಂದರೆ ಮನೆ ಸ್ವಸ್ತವಾಗಿರುತ್ತೆ. ಸ್ವಸ್ತಿಕ ವನ್ನು ದಾಟಿ ಹೋದಾಗ ನಾವು ಎಲ್ಲೇ ಇರಲಿ ಸ್ವಸ್ತವಾಗಿರಲಿ ಅಂತ . ಹೊಸ್ತಿಲಿನ ರಂಗೋಲಿ ಮುಗಿಸಿ ಬಾಗಿಲಿನ ಎಡ ಮತ್ತು ಬಲ ಚಿತ್ರದಲ್ಲಿ ನೋಡಿ ಅಲ್ಲಿ ಬಲ ಜಯ ಮತ್ತು ಎಡಗಡೆ ವಿಜಯ ಹಾಕಬೇಕು ಅಲ್ಲಿ ಕೂಡಾ ಶಂಖ ಚಕ್ರ ಗದೆ ಮತ್ತು ಕಮಲವನ್ನು ಬಿಡಿಸಬೇಕು. ಯಾಕೆ ಅಂದರ ನಾವು ಮನೆಯಲ್ಲಿ ವಿಷ್ಣುವಿನ ಪೂಜೆ ಮಾಡುತ್ತೇವೆ.  ಅಂದ ಮೇಲೆ ಜಯ ವಿಜಯರು ಬಾಗಿಲಲ್ಲಿ ಇರಲೇ ಬೇಕು... ನಂತರ ತುಳಸಿ ಮುಂದೆ ತುಳಸಿ ಯಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿರುತ್ತಾನೆ . ಅಂದ ಮೇಲೆ ತುಳಸಿ ಮುಂದೆ ಪದ್ಮವನ್ನು ಶಂಖ ಚಕ್ರ ಆಕಳ ಪಾದ ಹಾಕಿ . ಒಂದು ಹೊತ್ತಾದರೂ ತುಳಸಿ ಮುಂದೆ ದೀಪ ಹಚ್ಚಿ . ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ. ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ. ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಸಾಧ್ಯ.....

No comments:

Post a Comment