Wednesday, February 26, 2014

ಸವಿ ನೆನಪು

   
     ಅಂದು ಹುಡುಗಿ ನೂಡುವ ಶಾಸ್ತ್ರ. ಮನಸ್ಸಿನಲ್ಲಿ ಏನೋ ಒಂದು ರೀತಿಯ ಸಡಗರ, ಸಂಬ್ರಮ. ಮೊದಲ ಬಾರಿಗೆ ಹುಡುಗಿ ನೋಡುವ ಶಾಸ್ತ್ರದಲ್ಲೆ, ಪಾಯಸಕ್ಕೆ ತುಪ್ಪ ಬಡಿಸುವಾಗಲೇ ನನ್ನಿನಿಯನಿಗೆ ಮನಸು ಕೊಟ್ಟುವಳು ನಾನು. ಅಂದಿನಿಂದ ಯಾವಾಗ ನಮ್ಮಿಬ್ಬರ ನಿಶ್ಚಿತಾರ್ಥ ನಡೆಯುತ್ತದೆ, ಮಾತನಾಡಲು ಲೈಸೆನ್ಸ್ ಯಾವಾಗ ಸಿಗಬಹುದೆಂದು ಕಾದಿದ್ದ ಕಷ್ಟ ನಮಗೆ ಗೊತ್ತು. ಎಂಗೇಜ್‌ಮೆಂಟ್ ಮುಗಿದು ಮದುವೆ ದಿನಾಂಕ ಗೊತ್ತಾಗುತ್ತಿದ್ದಂತೆ ಆದ ಖುಷಿ ಅಷ್ಟಿಷ್ಟಲ್ಲ. ಆದರೂ ಎಂಗೇಜ್‌ಮೆಂಟ್ ದಿನ ಚೆಂದವಾಗಿ ಕೈ ಹಿಡಿದು ಉಂಗುರ ತೊಡಸದೆ, ಬೆರಳ ತುದಿಯಲ್ಲಿ ಅರ್ಧಕ್ಕೆ ಉಂಗುರವನ್ನು ಬಿಟ್ಟು ನೀನೇ ಹಾಕಿಕೋ ಎಂದಿದ್ದಕ್ಕೆ ಕೋಪಗೊಂಡ ಅವನು ಮದುವೆಯಾಗಲಿ ಆಮೇಲೆ ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕಿದ್ದ. ಆಮೇಲೆ ಅಪರೂಪಕ್ಕೊಮ್ಮೆ ಸಿಗುತ್ತಿದ್ದ. ನಮ್ಮೂರ ಜಾತ್ರೆಯಲ್ಲಿ ಹಿಂದಿಂದೆ ಸುತ್ತಿದ್ದ, ಸಣ್ಣಗೆ ಕಣ್ಣು ಹೊಡೆದಿದ್ದ ಅವನ ತುಂಟಾಟಗಳು ನನಗೆ ಇನ್ನೂ ಇಷ್ಟವಾಗಿದ್ದವು.

     ಮದುವೆ ದಿನ ಬಂದೇ ಬಿಡ್ತು. ನಮ್ಮ ಮದುವೆ ಅಪ್ಪಟ ಹಳ್ಳಿಯ ಸಂಪ್ರದಾಯದಲ್ಲಿ ನಡೆಯಿತು. ಬಾಳೆಗಿಡದ ಮಂಟಪ, ಮನೆತುಂಬ ಮಾವಿನ ತೋರಣ, ಕಬ್ಬು, ಹೂವುಗಳಿಂದ ಶೃಂಗರಿಸಲಾಗಿತ್ತು. ಶಾಸ್ತ್ರಗಳು ಸ್ವಲ್ಪ ಜಾಸ್ತಿಯಾಗೇ ಇತ್ತು. ಸಂಜೆಯಾಗುವ ಹೊತ್ತಿಗೆ ಮದುವೆಯ ಸುಸ್ತು ಮೈಮನ ಆವರಿಸಿತ್ತು. ಯಾವಾಗ ರಾತ್ರಿ ಊಟ ಹಾಕುತ್ತಾರೆ, ನಿದ್ದೆ ಮಾಡುತ್ತೇನೋ ಎಂದು ಕಾಯುತ್ತಿದ್ದೆ. ರಾತ್ರಿ ವೀಳ್ಯದೆಲೆ ಆಟ, ಕುಂಕುಮದ ನೀರಿನಲ್ಲಿ ಉಂಗುರ ಹುಡುಕುವ ಆಟಗಳನ್ನು ಆಡಿಸುತ್ತಿದ್ದರು. ಕೆಂಪಗಿದ್ದ ಆ ತಣ್ಣನೆಯ ನೀರಿನಲ್ಲಿ ಆಗಾಗ ಸುಮ್ಮನೆ ಕೈ ಹಿಡಿದು ಬಿಡುತ್ತಿದ್ದ ಅವನ ಸ್ಪರ್ಶ ನನ್ನನ್ನು ಎಚ್ಚರಿಸುತ್ತಿತ್ತು.

     ಶಾಸ್ತ್ರವೆಲ್ಲ ಮುಗಿದು, ನಾನು ರೂಮಿಗೆ ಕಾಲಿಡಬೇಕು ಅಂತ ಬಾಗಿಲು ತೆರೆದಿದ್ದಷ್ಟೇ ರೂಮಿನಲ್ಲಿ ಅವರು ಗೆಳೆಯರೊಂದಿಗೆ ತಮಾಷೆ ಮಾಡುತ್ತಿದ್ದನ್ನು ನೋಡಿದೆ. ನನ್ನನ್ನು ಕಂಡ ಕೂಡಲೇ ಅವರ ಸ್ನೇಹಿತರೆಲ್ಲರೂ ಹೊರಗೆ ಹೋದರು. ನನ್ನ ಆಯಾಸವನ್ನು ಕಂಡು ನನಗೆ ಸ್ವಲ್ಪ ರೇಗಿಸಿ, ನಂತರ ಮಲಗಿದರು. 

     ಮಾದುವೆ ಆದ್ದದ್ದಷ್ಟೇ ಅವರ ಜೊತೆ ಕಳೆದ ದಿನವೆಲ್ಲ ಸಂತಸದಿಂದಿತ್ತು. ಯಾವ ದಿನವು ಬೀಸರ ಎನ್ನಿಸಲಿಲ್ಲ. ಆಗಾಗ ಜಗಳ ಆಡಿದರು ಅದು ಖುಷಿಯಾಗಿಯೇ ಅಂತ್ಯವಾಗುತ್ತಿತ್ತು. ಸರಸ ವಿರಸಗಳ ನಡುವೆಯೆ ಜೀವನ ಸಾಗಿ ಬಂತು. ಹೇಗೋ ಎನೋ ಆತನ ಜತೆಗೆ ಕಳೆದ ದಿನಗಳೆಲ್ಲ ಖುಷಿಖುಷಿಯದ್ದೇ ಆಗಿತ್ತು . ಹತ್ತು ವರ್ಷಗಳು ಹೇಗೆ ಹುರುಳಿತು ಎಂದು ಈಗಲು ಸಂದೇಹವಾಗುತ್ತದೆ.  
                                                                                                                  - ಜಿ.ಕೆ. 

ಶಿವರಾತ್ರಿ ವಿಶೀಷ

     ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲ ದೇವಾನುದೇವತೆಗಳ ಪೂಜಾ ಕೈಂಕರ್ಯಗಳು ಹಗಲಿನಲ್ಲಿ ನಡೆಯುತ್ತವೆ. ಆದರೆ ಮಹಾ ಶಿವರಾತ್ರಿಯಂದು ಶಿವ ಪೂಜೆ ರಾತ್ರಿಯವೇಳೆ ಆಚರಿಸಲ್ಪಡುತ್ತದೆ. ಆ ದಿನ ಭಕ್ತರು ಪುಣ್ಯ ತೀರ್ಥಗಳಲ್ಲಿ ಮಿಂದು ಉಪವಾಸ ಮಾಡಿ ಬಿಲ್ವ ಪತ್ರೆಗಳಿಂದ ಅರ್ಚಿಸಿ ಭಕ್ತಿ ಭಾವಗಳಿಂದ ಜಾಗರಣೆ ಮಾಡಿ ಶಿವನನ್ನು ಸ್ತುತಿಸಿ ಭಜನೆ ಮಾಡಿ ಹರಕೀರ್ತನೆ ಗಳನ್ನು ಕೇಳಿ ಪಾವನ ರಾಗುತ್ತಾರೆ. ಶಿವರಾತ್ರಿ ಪೂಜೆ ರಾತ್ರಿ ಕಾಲವೆ ಪ್ರಶಸ್ತವೇಕೆಂದರೆ ಶಿವನು   ತಾನು ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿ ಯಂದು ರಾತ್ರಿ ಸಮಯದಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತೇನೆ  ಎಂದಿದ್ದಾನೆ. ಕಾರಣ ಶಿವರಾತ್ರಿ ದಿನದಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಪೂಜಿಸಿದವರ ಪಾಪಗಳು ಪರಿಮಾರ್ಜನೆಯಾಗುತ್ತವೆ ಎಂದು ಸಾರಿದ್ದಾನೆ ಎಂಬ ಬಗ್ಗೆ ಶಾಸ್ತ್ರೋಕ್ತಿ ಯೊಂದಿದೆ.  ಸ್ಕಂದ ಪುರಾಣ  ದಲ್ಲಿ ಶಿವರಾತ್ರಿ ಹಬ್ಬದಂದು ವೃತ ಪೂಜೆಗೆ ಸಂಮ್ಮಂಧ ಪಟ್ಟಂತೆ ಇರುವ ಉಕ್ತಿಯೊಂದರಲ್ಲಿ ' ಶಿವರಾತ್ರಿಯು ಮಹಾ ಶಿವರಾತ್ರಿ ಏಕೆಂದರೆ ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವಿರುವ ಪರ್ವಕಾಲ ಪೂಜೆಗೆ ಪ್ರಶಸ್ತ.' ರಾತ್ರಿಯ ವೇಳೆ ಯಾವ  ಸಮಯ ವೆಂದರೆ ಚತುರ್ದಶಿಯು ಪ್ರದೋಷ ಮತ್ತು ರಾತ್ರಿಸ್ತ ಎರಡೂ ಕಾಲ ಗಳನ್ನು ಒಳಗೊಂಡಿರಬೇಕು.. ತ್ರಯೋದಶಿಯು ಶಕ್ತಿರೂಪವಾದರೆ ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. ' ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆಯಿರಲಿ, ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆಯಿರಲಿ, ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆಯಿರಲಿ ಎಲ್ಲ ಕಥೆಗಳ ಸಾರಾಂಶ ಒಂದೆ. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರಿಗೆ ಸದ್ಗತಿ ಪ್ರಾಪ್ತವಾಯಿತು.  ಅವರುಗಳು ತಿಳಿಯದೆ ಪೂಜೆ ಅಭಿಷೇಕ ಮಾಡಿದ್ದರೂ ಅವರಿಗೆ ಶಿವ ಮುಕ್ತಿಯನ್ನು ಕರುಣಿ ಸಿರಬೇಕಾದರೆ ತಿಳಿದ ನಾವು ಭಕ್ತಿ ಪೂರ್ವಕ ವಾಗಿ ಶಿವರಾತ್ರಿಯಂದು ಶಿವಪೂಜೆ ಮಾಡಿ ಭಕ್ತಿಯಿಂದ ಜಾಗರಣೆ ಮಾಡಿದರೆ ಆ ಶಿವ ನಮಗೂ ಸದ್ಗತಿಯನ್ನು ಕಾಣಿಸದೆ ಇರಲಾರ ಎಂದು ನಂಬಿ ನಾವೂ ಇಲ್ಲಿಯ ವರೆಗೂ  ಮಹಾ ಶಿವರಾತ್ರಿ ಪೂಜೆ  ಯನ್ನು ಆಚರಿಸುತ್ತ ಬಂದಿದ್ದೇವೆ. 
     ವಿಷ್ಣು ಅಲಂಕಾರ ಪ್ರಿಯನಾದರೆ ಶಿವ ಅತ್ಯಂತ ಮಂಗಳ ಕಾರಕ ನಾಮರೂಪಕ ಗುಣ ಕರ್ಮಗಳುಳ್ಳ ಮಹಾದೇವ. ಅಂತಹ ಕರುಣಾ ಮಯಿಯಾದ ಪರಶಿವನಲ್ಲಿ ಮನಃಪೂರ್ವಕವಾಗಿ ಬೇಡಿಕೊಂಡು ಪೂಜಿಸಿದರೆ ಆತನಿಗೆ ತನ್ನ ಭಕ್ತನ ಬಗ್ಗೆಪ್ರೀತಿಯುಂಟಾಗುತ್ತದೆ. ಉಪವಾಸ ವೆಂದರೆ ಭಗವಂತನನ್ನು ನೆನೆಯುತ್ತ ಆತನ ಹತ್ತಿರವಿರುವುದು ಎಂದು ಅರ್ಥ. ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವನನ್ನು ಮಹಾ ಶಿವರಾತ್ರಿ  ಯಂದು ಧ್ಯಾನಿಸಿದರೆ ಧ್ಯಾನಪ್ರಿಯ ಶಿವ ನಮಗೆ ಸದ್ಗತಿಯನ್ನು ಕರುಣಿಸದೆ ಇರಲಾರ.

     ನಾವು ಭಾರತೀಯರು ವೈಜ್ಞಾನಿಕವಾಗಿ ಎಷ್ಟೆ ಮುಂದುವರಿದಿದ್ದರೂ ಹಬ್ಬ ಹರಿದಿನ ಧರ್ಮ ಕರ್ಮ ಮೋಕ್ಷ ಗಳಲ್ಲಿ ನಂಬಿಕೆ ಇರಿಸಿ ಕೊಂಡಿದ್ದು ಭಕ್ತಿಪುರಸ್ಕಾರವಾಗಿ ಅರ್ಥ ಪೂರ್ಣವಾಗಿ ಆಚರಿಸಿ ನಾವು ಮಾಡಿರ ಬಹುದಾದ ಪಾಪ ಕಾರ್ಯಗಳನ್ನು ಶಿವನಲ್ಲಿ ನಿವೇದಿಸಿಕೊಂಡು ಪಾಪ ಕರ್ಮಗಳನ್ನು ನೀಗಿಕೊಂಡು ಪಶ್ಚಾ ತಾಪದ ಅಗ್ನಿಕುಂಡದಲ್ಲಿ ಅಗ್ನಿಗರ್ಪಿಸಿ ಪುಣ್ಯ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಕಂಕಣ ಬದ್ಧರಾಗೋಣ. ಶಿವನಲ್ಲಿ ರುವ ಸರಳತೆ ತ್ಯಾಗಬುದ್ಧಿ ಕಷ್ಟ ಸಹಿಷ್ಣುತೆ ಜಗಕೆ ತೊಂದರೆ ಬಂದಾಗ ಮುಂದೆ ನಿಲ್ಲುವ, ಪ್ರೀತಿ ಪಾತ್ರರಿಗೆ ವರ ಕೊಡುವ ಉದಾರತನ ಇವು ನಮಗೆ ಆಧರ್ಶಗಳಾಗಲಿ.  ಮಹಾ ಶಿವರಾತ್ರಿ  ಪೂಜೆ ಜಾಗರಣೆಗಳು ಅರ್ಥ ಪೂರ್ಣ ಆಚರಣೆ ಗಳಾಗಲಿ. ಶಿವ ಸ್ಮರಣೆಯ ಪುಣ್ಯ ಕಾಲವನ್ನು ಕ್ರಮ ಬದ್ಧವಾಗಿ ಆಚರಿಸೋಣ. 

Monday, February 24, 2014

Jokes



ರೋಗಿ : ವೈದ್ಯರೇ ನನಗೆ ಉಸಿರಾಟದಲ್ಲಿ ತೊಂದರೆ ಇದೆ. 
ವೈದ್ಯ : ಚಿಂತಿಸಬೇಡ ನಾನು ಅದನ್ನು ನಿಲ್ಲಿಸಿಬಿಡುತ್ತೇನೆ. 

********** 

ಗುರು : ಶಾಮ, ೮೦೦ ವರ್ಷದ ಹನುಮನಿಗೆ ಹೊಸ ಹೆಸರನ್ನು ಸೂಚಿಸು. 
ಶಾಮ : ಇದು ಸುಲಭ, ಮಾರುತಿ ೮೦೦.

GK Poetry


Saturday, February 22, 2014

ಬಾಲ್ಯ - ಕನಸು ಮನಸುಗಳ ಚಿತ್ತಾರ

 



     ಕನಸು ಮನಸುಗಳ ಚಿತ್ತಾರವೇ  ಬಾಲ್ಯ. ವೃದ್ಧಾಪ್ಯದಲ್ಲಿ ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕುವುದೊಂತು ಅತಿ ಮಧುರ. ಸುಂದರ ಹಾಳೆಗಳಿಂದ ತುಂಬಿರುವ ಬಾಲ್ಯ ಸ್ವಪ್ನಕ್ಕಿಂತಲೂ ಸೊಗಸು.
     
     ಜೀವನ ಅತ್ಯಂತ ಸುಗಮ ಏನಿಸುವುದು ಬಾಲ್ಯದಲ್ಲೇ. ಗೌಪ್ಯತೆಯೇ ಇಲ್ಲದ ಸುಮಧುರ ಜೀವನ ಅದು. ದ್ವೇಷ, ಅಸೂಹೆಗಳ ಅಂಗಿಲ್ಲದೆ, ಜಾತಿ ಮತಗಳ ಭೇದವಿಲ್ಲದೆ ಸಮಾನತೆಯ ಬದುಕನ್ನು ಸಾರುವ ಒಂದು ಅಭೂತಪೂರ್ಣ ಚಿತ್ರಣ. ಮೊಗ್ಗಿನ ಮನಸ್ಸುಗಳಲ್ಲಿ ಅರಳುವ ಸುಮಧುರ ಕನಸ್ಸುಗಳು ನಾಳೆಯ ಚಿಂತೆ ಇಲ್ಲದೆ, ಅಂದಿನ ಚಟುವಟಿಕೆಯೊಂದಿಗೆ ಸಾಗುವ ಆ ಬದುಕು ಅತಿ ಸರಳ, ಬಹು ಸುಂದರ. 
     
     ಇಂತಹ ಬಾಲ್ಯದ ನೆನಪುಗಳನ್ನು ಎಲ್ಲರೂ ಸಹ ತಮ್ಮ ನಿತ್ಯ ಜೀವನದಲ್ಲಿ ಆಗಾಗ ಮೆಲುಕು ಹಾಕುತ್ತಾರೆ. ಆ ಸವಿ ನೆನಪುಗಳು ಜೀವನದುದ್ದಕ್ಕೂ ಸನಿಹದಲ್ಲಿರುತ್ತದೆ. ಅದನ್ನು ಮರೆಯಲು ಹೀಗೆ ಸಾಧ್ಯ? ನೀವೆ ಯೋಚಿಸಿ. 
ಕೆಲವರ ಪಾಲಿಗೆ ಅವರ ಬಾಲ್ಯ ಬಹಳ ಬೇಸರ ತನ್ದಿರುತ್ತದೆ. ಅವರ ಪಾಲಿಗೆ ಅದೊಂದು ಮರೆಯಲಾಗದ ಸಂಗತಿ. ಅವರ ಪಾಲಿಗೆ ಆ ನೆನಪುಗಳು ಜೀವದ ಅವಿಭಾಜ್ಯ ಅಂಗವಾಗಿರುತ್ತದೆ. 
     
     ನೀವೆ ಹೇಳಿ? ಆ ದಿನಗಳ ಸವಿ ನೆನಪನ್ನು ವರ್ಣಿಸುತ್ತಾ ಹೋದರೆ ಪದಗಳೇ ಸಾಲುವುದಿಲ್ಲ. ಅಂತಹ ನೆನಪುಗಳು ಯಾರಿಂದಾದರೂ ಮರೀಚಿಕೆಯಾಗಲು ಸಾಧ್ಯವೇ?
ಗೆಳೆಯರೊಂದಿಗೆ ಕಳೆದ ಕ್ಷಣಗಳು, ಆಡಿದ ಮಾತುಗಳು, ಮಾಡಿದ ಕೆಲಸಗಳು, ಊರನ್ನು ಸುತ್ತುತ್ತಿದ್ದ ಸನ್ನಿವೇಶಗಳು, ಆ ತೊದಲ ನುಡಿಯನ್ನು ಮರೆಯಲು ಹೇಗೆ ಸಾಧ್ಯ. 
     
     ಜೀವನವನ್ನು ಅತಿ ಸೊಗಸಾಗಿ ಕಳೆಯಬಹುದಾದ ವಯಸ್ಸೆಂದರೆ ಒಂದು ಬಾಲ್ಯ ಮತ್ತೊಂದು ತಾರುಣ್ಯ. ಯೌವನದಲ್ಲಿ ನಮ್ಮ ಬುದ್ಧಿ ಬೆಳೆದಿರುತ್ತದೆ, ನಾವು ಮಾಡುವ ಕೆಲಸಗಳ ಅರಿವಿರುತ್ತದೆ. ಆದರೆ ಬಾಲ್ಯದ ದಿನಗಳಲ್ಲಿ ಬುದ್ಧಿ ಬೆಳೆದಿರುವುದಿಲ್ಲ. ತಿಳಿಯದ ವಯಸ್ಸಿನಲ್ಲಿ ಮಾಡುವ ಚೇಷ್ಟೆ, ತುಂಟಾಟಗಳು, ಅರಿಯದೆ ಮಾಡುವ ಸಣ್ಣ ಸಣ್ಣ ತಪ್ಪುಗಳು, ಹೊಲ ಗದ್ದೆಗಳಲ್ಲಿ ನುಗ್ಗಿ ಹಣ್ಣು, ಕಾಯಿ ಕೀಳುವ ಪ್ರಸಂಗಗಳನ್ನು ಬರಿ ಮಾತಿನಲ್ಲಿ ಹೇಳಲು ಸಾಧ್ಯವೇ ಹೇಳಿ?
     
     ನಿಜಕ್ಕೂ ಬಾಲ್ಯದ ಜೀವನ ಕನಸ್ಸು ಮನಸ್ಸುಗಳ ಚಿತ್ತಾರವೇ ಸರಿ. ಈ ಸುಂದರ ಸಂಚಿಕೆಯಲ್ಲಿ ನಾವೆಲ್ಲರೂ ಬಾಲ್ಯವೆಂಬ ನೆಚ್ಚಿನ ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳ ಮೆಲುಕು ಹಾಕೋಣ.       
                                                                                                                  - ಜಿ.ಕೆ.         

Thursday, February 20, 2014

Quote


O Gulabiye..


Romantic Love

   


     Romance is the expressive and pleasurable feeling from an emotional attraction towards another person associated with love.

     In the context of romantic love relationships, romance usually implies an expression of one's strong romantic love, or one's deep and strong emotional desires to connect with another person intimately or romantically.

     Historically, the term "romance" originates with the medieval ideal of chivalry as set out in its Romance literature.

     Romantic love is contrasted with platonic love, which in all usages, precludes sexual relations, yet only in the modern usage does it take on a fully asexual sense, rather than the classical sense in which sexual drives are sublimated. Sublimation tends to be forgotten in casual thought about love aside from its emergence in psychoanalysis and Nietzsche

     Unrequited love can be romantic in different ways: comic, tragic, or in the sense that sublimation itself is comparable to romance, where the spirituality of both art and egalitarian ideals is combined with strong character and emotions. Unrequited love is typical of the period of romanticism, but the term is distinct from any romance that might arise within it.


     Romantic love may also be classified according to two categories, "popular romance" and "divine or spiritual" romance.

Tuesday, February 18, 2014

Be Positive in love

   

     Be positive while you are in love. Positive thinking changes the mind and attitude towards one and the another. The belief and trust which in both men and women is said to be a love towards each other.
   
     Try to be positive enough as everyday we are exposed to a barrage of negative words. As a result, it becomes easy to slip into the habit of negative thinking. This negativism comes in simple everyday conversation. For example, if you ask someone how he as been, isn't the answer we almost get, "Oh, I don't feel so bad!" Just think why people compare their well-being to bad rather than to good? This sought of negativism, misunderstanding, arises in each and everyone while they are in love with someone as a result their would be a more chances of break up.
   
     A true love will never break up when it is positive. A true love will never expect anything instead it gives everything. So be positive while you are in love and then you will be a true lover forever.